2024-11-02

ಬದುಕು ಭವಿಷ್ಯ ಕಾರ್ಯಕ್ರಮ ಬಳ್ಳಾರಿ ಜಿಲ್ಲೆ

Closed

ಪರಸ್ಪರ ಸಮ್ಮಿಲನ  November 2&3, 2024, ಬಳ್ಳಾರಿ

*ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.....*

*Online service* ಗಳು ಈಗ ಎಲ್ಲಾ ಮೊಬೈಲ್ ನಲ್ಲಿ ಮಾಡಬಹುದು. ನಮಗೆ ಕೆಲಸವಿಲ್ಲದೆ ಆಗಬಹುದು....ಆಗುತಿದೆ ಕೂಡ. ನಾವು ಯೋಚಿಸುವ ಕಾಲ ಮುಂದೋಗಿದೆ. ಸಮಯ ಬರಲಿ ಯೋಚಿಸೋಣ ಅನ್ನುವ ಸಮಯ ಬಂದಾಗಿದೆ.ಇದು ಬದಲಾವಣೆಗೆ ಸೂಕ್ತ ಸಮಯ. ಈಗ ಕಣ್ಣುಮುಚ್ಚಿ ಕುಳಿತರೆ *ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ* ಎಂಬತಾಗುತ್ತದೆ.

ಯಾರೊ ಒಬ್ಬರ ಏಳಿಗಾಗಿಯಲ್ಲ , ಪ್ರತಿಯೊಬ್ಬರ ಪ್ರಗತಿಗಾಗಿ ಸ್ವಯಂ ಉದ್ಯೋಗಿಗಳಿಗಾಗಿ ನಮ್ಮಿಂದ ನಮಗಾಗಿ ಹುಟ್ಟಿಕೊಂಡ *ಪರಸ್ಪರದಲ್ಲಿ* ಕಳೆದ 2 ವರ್ಷಗಳಿಂದ ಪ್ರಗತಿಪರ ಚಿಂತನೆಗಳನ್ನು ಮಾಡುತ್ತಾ ವ್ಯವಹಾರಭಿವೃಧಿಗಳತ್ತ ಗಮನಕೊಡುತ್ತಾ ಬಂದಿದೆ ನಮ್ಮ ಪರಸ್ಪರ.
ಇದರಂತೆ ಸಾಕಷ್ಟು ಸಹೋದರ/ಸಹೋದರಿಯರು ಫಲಾನುಭವಿಗಳಾಗಿದ್ದಾರೆ.

ಅದರಂತೆ ಈ ಬಾರಿಯ ವಾರ್ಷಿಕ (2024) ಹಾಗೂ *ಮತ್ತೊಂದು ಹೊಸ ಹುಡುಕಾಟ/ಅವಕಾಶ/ಕಲಿಕೆ/ಗಳಿಕೆಗೆ ದಾರಿಯೊಂದಿಗೆ* ಬಳ್ಳಾರಿಯಲ್ಲಿ ನಡೆಯಲಿದೆ.

 ನಿಮಗೆ ಈ ವಿಚಾರ ತಿಳಿಸುವುದರೊಂದಿಗೆ ನಿತ್ಯ ತರಬೇತಿ ಮಾಡಿ ನಿಮ್ಮ ನಿತ್ಯದಗಳಿಕೆ ಹೆಚ್ಚಿಸಲು ಅವಕಾಶ ಮಾಡಿಕೊಟ್ಟು.... ಆ ಗಳಿಕೆಯಲ್ಲಿ ದಿನಕ್ಕೆ ಇಂತಿಷ್ಟು ಉಳಿಕೆಮಾಡಿ ಯಾವುದೇ ಹೊರೆಯಿಲ್ಲದೆ ನೀವುಗಳು ಎಲ್ಲರೂ ಬಳ್ಳಾರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಅನುಕೂಲ ಪಡೆದು ಕಲಿತು ಗಳಿಸುವಲ್ಲಿ ಯಶಸ್ವಿಯಾಗಬೇಕು ಎಂಬುದು ಮುಖ್ಯ ಉದ್ದೇಶ.

*ಗಮನಿಸಿ:* _ಇಲ್ಲಿ ನಮಗೆ ನಾವೇ ಬಾಸ್_..... 
ಇದು ಅಪರೂಪದ ಅವಕಾಶ ಇಂತಹ ಅವಕಾಶ ಕಳೆದುಕೊಳ್ಳಬೇಡಿ. ನಾವು ನಮ್ಮನ್ನು ಪ್ರೇರೇಪಿಸಬೇಕು ಹಾಗೂ ನಮ್ಮಿಂದ ಇತರರು ಪ್ರೇರೇಪಿತರಾಗಬೇಕು....

*ಪರಸ್ಪರ ನಿರಂತರ.......💐*

*ಕಲಿಯುವ ಹಸಿವಿದ್ದರೆ ಮೂರು ರೀತಿಯಾಗಿ ಕಲಿಯಬಹುದು*  
1. ಪ್ರತಿನಿತ್ಯ ಬರುವ ಪ್ರತಿ ಸಂದೇಶಗಳನ್ನು  ತಪ್ಪದೇ ವೀಕ್ಷಿಸುವುದರಿಂದ ( 20% ಕಲಿಯಬಹುದು )
2. ಗೊತ್ತಿರುವ ಜ್ಞಾನವನ್ನು ಹಂಚಿಕೊಳ್ಳುವುದರಿಂದ ( 30% )
3. ಗೊತ್ತಿಲ್ಲದ್ದನ್ನು ಕೇಳಿ ಪಡೆಯುವುದರಿಂದ  ( 50 % )
✅ ಏನನ್ನಾದರೂ ಸ್ವಪ್ರಯತ್ನದಿಂದ ಕಲಿಯಬೇಕು ಅಥವಾ ಗಳಿಸಬೇಕು ಎಂಬ  ಹವ್ಯಾಸವು
ಇತರರಲ್ಲಿ ಅವಲಂಬಿತವಾಗುವ  ಮನೋಭಾವದಿಂದ ನಮ್ಮನ್ನು ಸ್ವತಂತ್ರರನ್ನಾಗಿ ಮಾಡುತ್ತದೆ.

✅ ಗುಲಾಮಗಿರಿಗೆ ಮೂಲ ಅಶ್ರದ್ದೆ
ಸ್ವಾತಂತ್ರ್ಯಕ್ಕೆ ಮೂಲ ಶ್ರದ್ಧೆ.

✅ ಒಬ್ಬರಿಗೆ ಒಂದು ಕೆಲಸ ಮಾಡಲು ಸಾಧ್ಯ ಇದೆ ಎಂದಲ್ಲಿ ಮತ್ತೊಬ್ಬರಿಗೂ ಆ ಕೆಲಸವನ್ನು ಮಾಡಲು ಸಾಧ್ಯವಿದೆ ಎಂದರ್ಥ. 
ಬೇಕಾಗಿರುವುದೆಲ್ಲವೂ ಶ್ರದ್ಧೆ ಶ್ರದ್ಧೆ ಶ್ರದ್ಧೆ..